ಮಲಪ್ರಭಾ (ರೇಣುಕಾ ಸಾಗರ) ಅಣೆಕಟ್ಟು (Malaprabha Dam) ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನವಿಲುತೀರ್ಥ ಕಣಿವೆಯಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಅಣೆಕಟ್ಟಾಗಿದೆ. 1972 ರಲ್ಲಿ ಪೂರ್ಣಗೊಂಡ ಈ ಯೋಜನೆಗೆ ಪ್ರಸಿದ್ಧ ರೇಣುಕಾ ಎಲ್ಲಮ್ಮ ದೇವಸ್ಥಾನದ ಸ್ಮರಣಾರ್ಥ 'ರೇಣುಕಾ ಸಾಗರ' ಎಂದು ಹೆಸರಿಸಲಾಗಿದೆ.